ನಿನ್ನ ಮನೆಯ ಚಾವಡಿಯಿಂದ
ನನ್ನ ಕೆಳೆಗೆ ನೂಕಿ ಬಿಡು
ಮರುಭೂಮಿಯಲಿ ಬಿತ್ತಿದ ಮೋಡವ
ನೀನೆ ಹಿಂದಕೆ ಕಳಿಸಿ ಬಿಡು
ಓ ದೇವರೇsss, ದಯಮಾಡಿ ಆ ಮರೆವ ಕೊಡು...
ಮುಂಬೆಳಗಿನಲಿ ಕಂಡ ಸ್ವಪ್ನವ
ಕಣ್ಣಿಗೆ ಕಾಣದಂತೆ ಮುಚ್ಚಿ ಬಿಡು
ಎದೆಯ ಕೊರಗು ಹೊರಗ ಬಾರದಂತೆ
ಬಾಯಿಗೆ ಬೀಗ ಹಾಕಿ ಬಿಡು
ಬಾಳಿನ ಪಯಣದ ನಡುದಾರಿಯಲಿ
ಸುಮ್ಮನೆ ಹೇಳದೆ ಹಾಗೆ ಹೋಗಿ ಬಿಡು
ಪ್ರೇಮದ ಶಾಲೆಯ ಗುರುತಿನ ಚೀಟಿಯ
ತಾರದೆ ಹೋದಕೆ ಹೊರ ಹಾಕಿ ಬಿಡು
ಚಪ್ಪಾಳೆಗೆ ಕೈ ಸೇರಿಸೋ ಮುನ್ನ
ಚಿಟಿಕೆ ಹೊಡೆದು ಕೈ ತೊಳೆದು ಬಿಡು
ಅಂದದ ಅರಗಿನ ಅರಮನೆಯಲ್ಲಿ
ದೀಪವ ಬೆಳಗಿಸಿ ಸರಿದು ಬಿಡು, ದೂರ ಸರಿದು ಬಿಡು...
ವಿ.ಸೂ. ಮೂಲ ಆಧಾರ: ಯೋಗರಾಜ್ ಭಟ್, ಗುರುಕಿರಣ್ , "ನನ್ನ ಎದೆಯಲಿ...", ಅರಮನೆ ಚಿತ್ರ.
Subscribe to:
Post Comments (Atom)
No comments:
Post a Comment