ಹೊಸ ಬ್ಲಾಗ್ನಲ್ಲಿ ಸದಾ ಈ ನೆನಪು ಹಸಿರಾಗಿ ಇರಬೇಕೆಂದು ಒಂದು ಒಲವ ಕವಿತೆ ಬರೆದಿರುವೆ. ನಿಜ ಹೇಳಬೇಕಂದೆರೆ ಈ ಕವನಕ್ಕೆ ಜನ್ಮ ಕೊಟ್ಟಿದ್ದು ಒಂದು ಕಾಗದದ ಮೇಲೆ, ಅದು ಒಂದು ತಿಂಗಳ ಹಿಂದೆ. ಅಂದ ಹಾಗೆ ಈ ಕವಿತೆ ಬರೆಯುವ ಗೀಳು ಬಹುಕಾಲದಿಂದ ಉಳಿದುಕೊಂಡಿದೆ. ಬಹುಷಃ ಆರಂಭವಾದದ್ದು, ತರಗತಿಯು ನವ ವಸಂತಕ್ಕೆ ಕಾಲಿಟ್ಟಾಗ!
ಒಲವ ಕವಿತೆ ಎಂದಾಕ್ಷಣ ಪಡ್ಡೆ ಹುಡುಗರು ಕವಿಯಾಗಿಬಿಡುತ್ತಾರೆ ಎಂಬುದು ಸತ್ಯಕ್ಕೆ ದೂರವೇನಲ್ಲ! ಏನೇ ಇರಲಿ, ಈ ಪುಟ್ಟ ಕವನವೊಂದು ಆ ಭಾವನೆ ನಿಮಗೆ ಮೂಡಿಸದಿದ್ದಲ್ಲಿ ನಾನೊಬ್ಬ ಶಿಷ್ಯ ಕವಿಯಾಗುವುದರಲ್ಲಿ ಸಂದೇಹವಿಲ್ಲವೆನಿಸುತ್ತದೆ! ಇರಲಿ, ಈ ಮುಂದಿನ ಸಾಲುಗಳು ನನ್ನ ಮನದ ಕೇವಲ ಕಾಲ್ಪನಿಕ ಒಳ ಹೂರಣವನ್ನು ನಿಮಗೆ ಸ್ವಲ್ಪ ಉಣಬಡಿಸಲಿ!
ಒಲವ ಕವಿತೆ ಎಂದಾಕ್ಷಣ ಪಡ್ಡೆ ಹುಡುಗರು ಕವಿಯಾಗಿಬಿಡುತ್ತಾರೆ ಎಂಬುದು ಸತ್ಯಕ್ಕೆ ದೂರವೇನಲ್ಲ! ಏನೇ ಇರಲಿ, ಈ ಪುಟ್ಟ ಕವನವೊಂದು ಆ ಭಾವನೆ ನಿಮಗೆ ಮೂಡಿಸದಿದ್ದಲ್ಲಿ ನಾನೊಬ್ಬ ಶಿಷ್ಯ ಕವಿಯಾಗುವುದರಲ್ಲಿ ಸಂದೇಹವಿಲ್ಲವೆನಿಸುತ್ತದೆ! ಇರಲಿ, ಈ ಮುಂದಿನ ಸಾಲುಗಳು ನನ್ನ ಮನದ ಕೇವಲ ಕಾಲ್ಪನಿಕ ಒಳ ಹೂರಣವನ್ನು ನಿಮಗೆ ಸ್ವಲ್ಪ ಉಣಬಡಿಸಲಿ!
ಕೈ ಮುಗಿದು ಒಳಗೆ ಬಾ........
ಕೈ ಮುಗಿದು ಒಳಗೆ ಬಾ ಓ ಗೆಳತಿ,
ಭವ್ಯ ಪ್ರೇಮ ಮಂದಿರವಿದು!
ಮೈ ಮನಗಳ ರೋಮಂಚನಕೆ,
ನವ್ಯ ಹೂ ಹಂದರವಿದು!
ಹಸಿರುಟ್ಟು ನೀ ಬರುವಾಗ,
ಪ್ರಣಯ ದೀವಿಗೆ ಬೆಳುಗುತಿರಲಿ!
ನಿನ್ನ ಹೆಜ್ಜೆಯ ಗೆಜ್ಜೆ ಸವಿ ನಾದಕೆ,
ಜಗದ ಬೇಗೆಗಳೆಲ್ಲ ಈ ಮನದಿಂದ ತೊಲಗಲಿ!
ನಾಜೂಕಿನಿಂದ ನಸುನಾಚಿ ಒಳಗೆ ಬಾ ಓ ಗೆಳತಿ,
ಬಣ್ಣಬಣ್ಣದ ರಂಗವಲ್ಲಿ ಅಂಗಳದಿ ನಿನ್ನ ಸ್ವಾಗತಿಸಿದೆ!
ಹೊಸಿಲ ಪೂಜೆಯ ನೀ ಮಾಡಿ ಬಾ ಓ ಗೆಳತಿ,
ಹೊಸ ವ(ಹ)ರುಷ ನಮಗಾಗಿ ಕಾದಿದೆ!
ಬಲಗಾಲಿಟ್ಟು ಒಳಗೆ ಬಾ ಓ ಗೆಳತಿ,
ನಮಗಾಗಿ ಭಾಗ್ಯದ ಬಾಗಿಲು ತೆರೆದಿದೆ!
ನಂಬಿಕೆಯ ಕೈಯಿಂದ ಅನುಮಾನಗಳ ಬೀಗ ಒಡೆದು ಬಾ ಓ ಗೆಳತಿ,
ಸದಾ ಈ ದೇವತೆಯ ಆಗಮನಕೆ ಕಾದಿದೆ!
ಡಿ.ಗು.ರಾವ್
ಕೈ ಮುಗಿದು ಒಳಗೆ ಬಾ ಓ ಗೆಳತಿ,
ಭವ್ಯ ಪ್ರೇಮ ಮಂದಿರವಿದು!
ಮೈ ಮನಗಳ ರೋಮಂಚನಕೆ,
ನವ್ಯ ಹೂ ಹಂದರವಿದು!
ಹಸಿರುಟ್ಟು ನೀ ಬರುವಾಗ,
ಪ್ರಣಯ ದೀವಿಗೆ ಬೆಳುಗುತಿರಲಿ!
ನಿನ್ನ ಹೆಜ್ಜೆಯ ಗೆಜ್ಜೆ ಸವಿ ನಾದಕೆ,
ಜಗದ ಬೇಗೆಗಳೆಲ್ಲ ಈ ಮನದಿಂದ ತೊಲಗಲಿ!
ನಾಜೂಕಿನಿಂದ ನಸುನಾಚಿ ಒಳಗೆ ಬಾ ಓ ಗೆಳತಿ,
ಬಣ್ಣಬಣ್ಣದ ರಂಗವಲ್ಲಿ ಅಂಗಳದಿ ನಿನ್ನ ಸ್ವಾಗತಿಸಿದೆ!
ಹೊಸಿಲ ಪೂಜೆಯ ನೀ ಮಾಡಿ ಬಾ ಓ ಗೆಳತಿ,
ಹೊಸ ವ(ಹ)ರುಷ ನಮಗಾಗಿ ಕಾದಿದೆ!
ಬಲಗಾಲಿಟ್ಟು ಒಳಗೆ ಬಾ ಓ ಗೆಳತಿ,
ನಮಗಾಗಿ ಭಾಗ್ಯದ ಬಾಗಿಲು ತೆರೆದಿದೆ!
ನಂಬಿಕೆಯ ಕೈಯಿಂದ ಅನುಮಾನಗಳ ಬೀಗ ಒಡೆದು ಬಾ ಓ ಗೆಳತಿ,
ಸದಾ ಈ ದೇವತೆಯ ಆಗಮನಕೆ ಕಾದಿದೆ!
ಡಿ.ಗು.ರಾವ್