Search This Blog

Friday, April 30, 2010

ಕೈ ಮುಗಿದು ಒಳಗೆ ಬಾ........

ಹೊಸ ಬ್ಲಾಗ್ನಲ್ಲಿ ಸದಾ ಈ ನೆನಪು ಹಸಿರಾಗಿ ಇರಬೇಕೆಂದು ಒಂದು ಒಲವ ಕವಿತೆ ಬರೆದಿರುವೆ. ನಿಜ ಹೇಳಬೇಕಂದೆರೆ ಈ ಕವನಕ್ಕೆ ಜನ್ಮ ಕೊಟ್ಟಿದ್ದು ಒಂದು ಕಾಗದದ ಮೇಲೆ, ಅದು ಒಂದು ತಿಂಗಳ ಹಿಂದೆ. ಅಂದ ಹಾಗೆ ಈ ಕವಿತೆ ಬರೆಯುವ ಗೀಳು ಬಹುಕಾಲದಿಂದ ಉಳಿದುಕೊಂಡಿದೆ. ಬಹುಷಃ ಆರಂಭವಾದದ್ದು, ತರಗತಿಯು ನವ ವಸಂತಕ್ಕೆ ಕಾಲಿಟ್ಟಾಗ!
ಒಲವ ಕವಿತೆ ಎಂದಾಕ್ಷಣ ಪಡ್ಡೆ ಹುಡುಗರು ಕವಿಯಾಗಿಬಿಡುತ್ತಾರೆ ಎಂಬುದು ಸತ್ಯಕ್ಕೆ ದೂರವೇನಲ್ಲ! ಏನೇ ಇರಲಿ, ಈ ಪುಟ್ಟ ಕವನವೊಂದು ಆ ಭಾವನೆ ನಿಮಗೆ ಮೂಡಿಸದಿದ್ದಲ್ಲಿ ನಾನೊಬ್ಬ ಶಿಷ್ಯ ಕವಿಯಾಗುವುದರಲ್ಲಿ ಸಂದೇಹವಿಲ್ಲವೆನಿಸುತ್ತದೆ! ಇರಲಿ, ಈ ಮುಂದಿನ ಸಾಲುಗಳು ನನ್ನ ಮನದ ಕೇವಲ ಕಾಲ್ಪನಿಕ ಒಳ ಹೂರಣವನ್ನು ನಿಮಗೆ ಸ್ವಲ್ಪ ಉಣಬಡಿಸಲಿ!

                ಕೈ ಮುಗಿದು ಒಳಗೆ ಬಾ........ 


ಕೈ ಮುಗಿದು ಒಳಗೆ ಬಾ ಓ ಗೆಳತಿ,
                     ಭವ್ಯ ಪ್ರೇಮ ಮಂದಿರವಿದು!
ಮೈ ಮನಗಳ ರೋಮಂಚನಕೆ,
                     ನವ್ಯ ಹೂ ಹಂದರವಿದು!


ಹಸಿರುಟ್ಟು ನೀ ಬರುವಾಗ,
                    ಪ್ರಣಯ ದೀವಿಗೆ ಬೆಳುಗುತಿರಲಿ!
ನಿನ್ನ ಹೆಜ್ಜೆಯ ಗೆಜ್ಜೆ ಸವಿ ನಾದಕೆ,
                    ಜಗದ ಬೇಗೆಗಳೆಲ್ಲ ಈ ಮನದಿಂದ ತೊಲಗಲಿ!


ನಾಜೂಕಿನಿಂದ ನಸುನಾಚಿ ಒಳಗೆ ಬಾ ಓ ಗೆಳತಿ,
                    ಬಣ್ಣಬಣ್ಣದ ರಂಗವಲ್ಲಿ ಅಂಗಳದಿ ನಿನ್ನ ಸ್ವಾಗತಿಸಿದೆ!
ಹೊಸಿಲ ಪೂಜೆಯ ನೀ ಮಾಡಿ ಬಾ ಓ ಗೆಳತಿ,
                    ಹೊಸ ವ(ಹ)ರುಷ ನಮಗಾಗಿ ಕಾದಿದೆ!


ಬಲಗಾಲಿಟ್ಟು ಒಳಗೆ ಬಾ ಓ ಗೆಳತಿ,
                    ನಮಗಾಗಿ ಭಾಗ್ಯದ ಬಾಗಿಲು ತೆರೆದಿದೆ!
ನಂಬಿಕೆಯ ಕೈಯಿಂದ ಅನುಮಾನಗಳ ಬೀಗ ಒಡೆದು ಬಾ ಓ ಗೆಳತಿ,
                    ಸದಾ ಈ ದೇವತೆಯ ಆಗಮನಕೆ ಕಾದಿದೆ!


ಡಿ.ಗು.ರಾವ್

Wednesday, April 28, 2010

ಮುಖಪುಟ

ನಮಸ್ತೆ ಬ್ಲಾಗ್ಗೆ !
ಬ್ಲಾಗ್ನಲ್ಲಿ ಮೊದಲ ಸವಿ ತೊದಲ ನುಡಿ ಬರೆಯುವ ಸಂಧರ್ಭ ಒದಗಿ ಬಂದಿರುವುದು ನನ್ನ ಹಾಗು ಓದುಗರ ಪುಣ್ಯ !
"ಬರೆಯುವುದು ಆದರೆ ಕನ್ನಡದಲ್ಲೇ ಆಗಲಿ, ಅದು ಪುಸ್ತಕದಲ್ಲಾಗಲಿ ಇಲ್ಲವೇ ಇ-ಪುಸ್ತಕದಲ್ಲಾಗಲಿ" ಎಂಬ ಪುಟ್ಟ ಭಾಷಾಭಿಮಾನ ಮೆರೆಯುವ ಗುರಿ ನನ್ನ ಜೀವನದ ಒಂದು ಮೆಟ್ಟಿಲು!
 ಅಂತರ್ಜಾಲದ ಅಂತರಂಗದ ಶಕ್ತಿ ವೃದ್ಧಿಸಿತ್ತಿರುವುದಕ್ಕೆ ಅಸಂಖ್ಯಾತ ಉದಾಹರಣೆಗಳಿವೆ. ಬ್ಲಾಗ್ಗಳು ಅದರಲ್ಲಿ ಒಂದು ಚಿಕ್ಕ ಉದಾಹರಣೆ ಮಾತ್ರವಾದರೂ ಅತ್ಯುತ್ತಮವಾದವುಗಳಲ್ಲಿ ಒಂದು! 
ಬ್ಲಾಗ್ನಲ್ಲಿ ತೋರುವ ಎಲ್ಲಾ ಕನ್ನಡ ಶಬ್ದಗಳು ಗ್ರಾಂಥಿಕವಾಗಿ ಸರಿಯಾಗಿರುವುದನ್ನು ಕಂಡು ಕನ್ನಡ ಉಪಾಸಕರು ಹೃದಯದುಂಬಿ ಹರಸಲಿ! ಏಕೆಂದರೆ, ಇವುಗಳನ್ನು ಸೃಷ್ಟಿಸಲು ಪಡುವ ಹರಸಾಹಸ ನಮ್ಮಂಥ ಗಣತಂತ್ರ ವಿಜ್ಞಾನಿಗಳಿಗೆ ಮಾತ್ರ ಗೊತ್ತು!

ಮತೊಮ್ಮೆ ಧನ್ಯವಾದಗಳು ಬ್ಲಾಗ್ಗೆ,
ಡಿ.ಜಿ.ರಾವ್ (ಗುರುರಾಜ ರಾವ್ ದೇಸಾಯಿ)